ಹೆಬ್ರಿಯಲ್ಲಿ ಹಕ್ಕಿಗಳಿಗೊಂದಿಷ್ಟು ಕಾಳು ನೀರು
ಹೆಬ್ರಿ, ಎ.14: ಬಿಸಿಲ ಬೇಗೆಗೆ ಹಕ್ಕಿಗಳು ನೀರು ಕಾಳಿಗಾಗಿ ಚಡಪಡಿಸುತ್ತಿದು ಈ ಹಿನ್ನಲೆಯಲ್ಲಿ
ಹೆಬ್ರಿಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಚಾಣಕ್ಯ ಏಜ್ಯಕೇಶನ್ ಮತ್ತು ಕಲ್ಚರಲ್ ಆಕಾಡೆಮಿ ನೇತೃತ್ವದಲ್ಲಿ ನಡೆಯುತ್ತಿರುವ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಿಗೆ ರಜಾ ಶಿಬರದ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಎ.15 ರಂದು ಬೆಳಿಗ್ಗೆ 10ಗಂಟೆಗೆ ಹೆಬ್ರಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಹಕ್ಕಿಗಳಿಗೊಂದಿಷ್ಟು ಕಾಳು ನೀರು ಕಾರ್ಯಕ್ರಮ ನಡೆಯಲಿದೆ. ಹೆಬ್ರಿ ವಲಯ ಅರಣ್ಯಧಿಕಾರಿ ಅನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆ ಕಾರ್ಕಳ ಇ ವರಿಂದ ಅಗ್ನಿ ಪ್ರತ್ಯಕ್ಷತೆ ಹಾಗೂ ಆಗುಂಬೆಯ ಅಜೇಯ್ ಗಿರಿಯವರಿಂದ ಹಾವು ನಾವು ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Post a Comment