ಹೆಬ್ರಿ ಜೇಸಿಐ ನೇತ್ರತ್ವದಲ್ಲಿ ಬೇಸಿಗೆ ರಜಾ ಶಿಬಿರಕ್ಕೆ ಚಾಲನೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ -ಸೀತಾನದಿ ವಿಠಲ್ ಶೆಟ್ಟಿ

ಹೆಬ್ರಿ ಜೇಸಿಐ ನೇತ್ರತ್ವದಲ್ಲಿ ಬೇಸಿಗೆ ರಜಾ ಶಿಬಿರಕ್ಕೆ ಚಾಲನೆ 


ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ -ಸೀತಾನದಿ ವಿಠಲ್ ಶೆಟ್ಟಿ 


ಹೆಬ್ರಿ : ರಜಾ ಸಮಯವನ್ನು ವ್ಯರ್ಥ ಕಾಲಹರಣ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡಾಗ ಮಕ್ಕಳ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವಾಗುತ್ತದೆ ಎಂದು ಸೀತಾ ನದಿ ಸೌಖ್ಯ ಯೋಗ ಟ್ರಸ್ಟ್ ನ ಅಧ್ಯಕ್ಷ ಸೀತಾ ನದಿ ವಿಠಲಶೆಟ್ಟಿ ಹೇಳಿದರು. 

ಅವರು ಎ.16ರಂದು ಹೆಬ್ರಿ ಜೆಸಿಐ ನೇತೃತ್ವದಲ್ಲಿ ಚಾಣಕ್ಯ ಎಜುಕೇಶನ್  ಕಲ್ಚರ್ ಅಕಾಡೆಮಿ  ಹೆಬ್ರಿ ಇವರ ಸಹಯೋಗದೊಂದಿಗೆ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆದ  ಬೇಸಗೆ ರಜಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.


 ಬಳಿಕ ಯೋಗದ ಬಗ್ಗೆ  ಪ್ರಾತ್ಯಕ್ಷಿತೆಯೊಂದಿಗೆ ಮಾಹಿತಿ ನೀಡಿ ಯೋಗ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಯೋಗ ಸಹಕಾರಿ ಎಂದರು. 

 ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿಜಿಸಿ ಅಧ್ಯಕ್ಷ ರಕ್ಷಿತಾ ಪಿ ಭಟ್ ವಹಿಸಿದ್ದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget