ಶಿವಪುರ ಶಂಕರಲಿಂಗೇಶ್ವರ ದೇವಸ್ಥಾನ, ಪುನರ್ ಪ್ರತಿಷ್ಠಾಷ್ಟ ಬಂಧ ಕಾರ್ಯಕ್ರಮ ಸಂಪನ್ನ

ಶಿವಪುರ ಶಂಕರಲಿಂಗೇಶ್ವರ ದೇವಸ್ಥಾನ, ಪುನರ್ ಪ್ರತಿಷ್ಠಾಷ್ಟ ಬಂಧ ಕಾರ್ಯಕ್ರಮ  ಸಂಪನ್ನ  


ಹೆಬ್ರಿ, ಎ.15: ಹೆಬ್ರಿ ತಾಲೂಕಿನ ಅತ್ಯಂತ ಪ್ರಾಚೀನ ಶಿವಾಲಯಗಳಲ್ಲಿ ಒಂದಾದ ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಎ.15ರಂದು ದೇವರ ಪುನರ್ ಪ್ರತಿಷ್ಟಾಷ್ಟಬಂಧ ಕಾರ್ಯಕ್ರಮ  

 ಉಡುಪಿ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ  ಸಂಪನ್ನ  ಗೊಂಡಿತು.

ಬೆಳಿಗ್ಗೆ ಶಿಖರ ಪ್ರತಿಷ್ಠೆ, ಶ್ರೀ ದೇವರ ಪ್ರತಿಷ್ಠೆ,ಪ್ರಸನ್ನ ಪೂಜೆ, ಆಚಾರ್ಯ ದಕ್ಷಿಣೆ, ಪ್ರತಿಜ್ಞಾವಿಧಿ, ದಿಶಾಹೋಮ, ಮಹಾಬಲಿ ಪ್ರತಿಷ್ಠೆ, ಅಂಕುರಪೂಜೆ ನಡೆಯಿತು.

 ಮಧ್ಯಾಹ್ನ ನಡೆದ ಮಹಾಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು.ಮದ್ಯಾಹ್ನ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ  ಅವರಿಂದ ಧಾರ್ಮಿಕ ಉಪನ್ಯಾಸ  ಹಾಗೂ ಪ್ರವಚನ ನಡೆಯಿತು.  ಈ ಸಂದರ್ಭದಲ್ಲಿ ದೇವಸ್ಥಾನದ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ಜೀರ್ಣೋದರ ಸಮಿತಿಯ ಅಧ್ಯಕ್ಷ ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget